67
ಬೆಂ.ಗ್ರಾ.ಜಿಲ್ಲೆ: ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ದೇವನಹಳ್ಳಿ ಪಟ್ಟಣಕ್ಕೆ ಭೇಟಿ ನೀಡಿ, ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ವೇ ಸ್ಟ್ರ್ಯಾಟೆಜಿಕ್ ಟೌನ್ ರಿಂಗ್ ರಸ್ತೆ (ಎಸ್.ಟಿ.ಆರ್.ಆರ್) ಕಾಮಗಾರಿಯ ಪರಿಶೀಲನೆ ನಡೆಸಿದರು.

ಬಳಿಕ ರಾಣಿ ಕ್ರಾಸ್ ನಿಂದ ಜಿಲ್ಲಾಡಳಿತ ಕಛೇರಿ ವರೆಗೆ ವಾಹನದಲ್ಲಿ ಸಂಚರಿಸಿ, ಡಿಸಿ ಕಛೇರಿ ಸಮೀಪದಿಂದ ಸಚಿವೆ ನಿರ್ಮಲಾ ಸೀತಾರಾಮನ್ ಅವರು 100 ಮೀಟರ್ ಗಳಷ್ಟು ಕಾಲ್ನಡಿಗೆಯಲ್ಲಿ ಹೆದ್ದಾರಿ ರಸ್ತೆಯನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಸಂಸದರಾದ ಡಾ. ಕೆ.ಸುಧಾಕರ, ಮುಖಂಡರಾದ ವಿಜಯೇಂದ್ರ, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
