ಮರಕ್ಕೆ ಕಾರು ಡಿಕ್ಕಿ, ಮಾರುಕಟ್ಟೆ ಮುಖ್ಯಶಿಕ್ಷರ ಸ್ಥಳದಲ್ಲೆ ಸಾವು
ಸ್ಥಳೀಯ ಸುದ್ದಿಕ್ರೈಮ್


ದೊಡ್ಡಬಳ್ಳಾಪುರ : ನಗರದ ಮಾರುಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಕಾರಿನಲ್ಲಿ ಶಾಲೆಗೆ ಬರುವಾಗ ಮಾರ್ಗಮಧ್ಯೆ ಕಾರು ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಕಾಡನೂರು ಕ್ರಾಸ್ ಬಳಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ, ಘಟನೆಯಲ್ಲಿ ಮುಖ್ಯ ಶಿಕ್ಷಕರಾದ ಜಗದೀಶಯ್ಯ (57) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಮೃತರು ತಾಲೂಕಿನ ಪುರುಷನಹಳ್ಳಿ ಮೂಲದವರು, ಸದ್ಯ ನೆಲಮಂಗದಲದಲ್ಲಿ ವಾಸವಾಗಿದ್ದರು. ದೊಡ್ಡಬಳ್ಳಾಪುರ ನಗರದ ಮಾರ್ಕೆಟ್ ಶಾಲೆಯ ಮುಖ್ಯೋಪಾಧ್ಯರಾಗಿ ಕೆಲಸ ಮಾಡುತ್ತಿದ್ದರು.
ಇಂದು ಶನಿವಾರವಾಗಿದ್ದರಿಂದ ಮುಂಜಾನೆಯ ಶಾಲೆಗೆ ಬರಲು ಕಾರಿನಲ್ಲಿ ಬರುತ್ತಿದ್ದರು ಈ ವೇಳೆ ಕಾರು ಮರಕ್ಕೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.