Ambedkar Jayanti: ಕಚೇರಿಪಾಳ್ಯದಲ್ಲಿ ಬಾಬಾ ಸಾಹೇಬರ ಜನ್ಮದಿನ ಅದ್ದೂರಿ ಆಚರಣೆ, ಅಂಬೇಡ್ಕರ್ ಪ್ರತಿಮೆ ಮೆರವಣಿಗೆ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ ನಗರದ 29ನೇ ವಾರ್ಡ್ ಕಚೇರಿಪಾಳ್ಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನವನ್ನು ಊರ ಜಾತ್ರೆಯಂತೆ ಅದ್ದೂರಿಯಾಗಿ ಆಚರಿಸಲಾಯಿತು.
ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ ದೇವರಂತೆ ಹೆಗಲ ಮೇಲೆ ಹೊತ್ತು ನಗರದ ತಾಲ್ಲೂಕು ಕಚೇರಿ ಮುಖ್ಯರಸ್ತೆ ಸೇರಿದಂತೆ ವಾರ್ಡ್ನ ಪ್ರಮುಖ ಬೀದಿಗಳಲ್ಲಿ ಅವರ ಪ್ರತಿಮೆಯನ್ನು ಹೊತ್ತು ಮೆರವಣಿಗೆ ಮಾಡಿ ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬಳಿಕ ಪ್ರಸಾದ ವಿನಿಯೋಗ ಮಾಡಿದರು.
ಈ ವೇಳೆ, ಇಲ್ಲಿನ ನಿವಾಸಿಗಳಾದ ಶಿವಶಂಕರ್, ಮಧುಸೂದನ್, ಅಂಜನ್ ಮೂರ್ತಿ, ಶಿವು, ಕೆಂಪ, ಮುನಿರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





ಕನ್ನಡ ಜಾಗೃತ ಪರಿಷತ್ನಲ್ಲಿ ಅಂಬೇಡ್ಕರ್ ಸ್ಮರಣೆ:
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 138ನೇ ಜನ್ಮದಿನವನ್ನು ರಾಜ್ಯ ಸೇರಿದಂತೆ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನವಾದ ಅವಕಾಶವನ್ನು ಸಂವಿಧಾನದ ಮೂಲಕ ಮಾಡಿಕೊಟ್ಟಿದ್ದಾರೆ. ಇವರು ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ ಎಂದು ಕನ್ನಡ ಪಕ್ಷದ ಮುಖಂಡರು ಅಭಿಪ್ರಾಯ ಪಟ್ಟರು.
ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಪರಿಷತ್ತಿನಲ್ಲಿ ನೆಡೆದ ಸಂವಿಧಾನ ಶಿಲ್ಪಿ ಬಾಬ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖಂಡರು ಸ್ಮರಿಸಿದರು.
ಈ ವೇಳೆ ಸಂಜೀವ್ ನಾಯ್ಕ, ಡಿ.ಪಿ ಆಂಜನೆಯ ಸೇರಿದಂತೆ ಹಲವರು ಭಾಗವಹಿಸಿದ್ದರು.