ಆಸ್ತಿ ವಿಚಾರಕ್ಕೆ ಮಚ್ಚು ಲಾಂಗು ಹಿಡಿದು ಹಲ್ಲೆ: ವೀಡಿಯೋ ನೋಡಿ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/29/20251 min read

ಆಸ್ತಿ ವಿಚಾರಕ್ಕೆ ಮಧ್ಯರಾತ್ರಿ ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಾಂಗು ಮಚ್ಚು, ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಡಸೊಣ್ಣೇನಹಳ್ಳಿಯಲ್ಲಿ ನಡೆದಿದೆ.

ಪ್ರಭು ಎಂಬುವವರ ಮನೆ ಮೇಲೆ ಮಹದೇವಪುರ ಬಿಬಿಎಂಪಿಯಲ್ಲಿ ಕೆಲಸ ಮಾಡುವ ಶೃತಿ ಎಂಬುವವರು ಗೂಂಡಾಗಳೊಂದಿಗೆ ಮನೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಮಚ್ಚು ಲಾಂಗು ಹಿಡಿದು ಮನೆಗೆ ನುಗ್ಗಿ ಕಿಟಕಿ ಗಾಜು, ಬಾಗಿಲು ಪುಡಿಪುಡಿ ಮಾಡಿರುವ ದೃಶ್ಯಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.