ರಾಜಕೀಯವಾಗಿ ಎಡ-ಬಲ ಎಂದು ಬೇರ್ಪಡಿಸಬೇಡಿ: ಹೆಚ್.ವಿ.ಮಂಜುನಾಥ್

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

4/22/20251 min read

ಮಹದೇವಪುರ: ರಾಜ್ಯದಲ್ಲಿ ದಲಿತ ಸಮುದಾಯಗಳನ್ನು ರಾಜಕೀಯಕ್ಕಾಗಿ ಎಡ ಬಲ ಎಂದು ಬೇರ್ಪಡಿಸುವ ಕೆಲಸ ಮಾಡಿವೆ ಎಂದು ರಾಜ್ಯ ಬಿಜೆಪಿ ಎಸ್.ಎಸ್ಸಿ ಮೋರ್ಚಾ ಉಪಾಧ್ಯಕ್ಷ ಹೆಚ್.ವಿ.ಮಂಜುನಾಥ್ ಹೇಳಿದರು.

ಹೂಡಿಯಲ್ಲಿ ಮಹದೇವಪುರ ದಲಿತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಜ್ಯೋತಿ ಬಾ ಪುಲೆ ಹಾಗೂ ಡಾ.ಬಾಬು ಜಗಜೀವನ್ ರಾಂ ಅವರ ಜಯಂತಿ ಪ್ರಯುಕ್ತ ಪಲ್ಲಕ್ಕಿ ಉತ್ಸವಕ್ಕೆ ಹಾಗೂ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ದಲಿತ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಮತ್ತು ರಾಜಕೀಯ ಪ್ರಜ್ಞೆ ಬರಲು ಒಂದಾಗುವ ಅವಶ್ಯವಿದೆ. ಎಲ್ಲಾ ದಲಿತ ಸಮುದಾಯಗಳು ಒಗ್ಗಟ್ಟಾದರೆ ಯಾವುದೇ ಹೋರಾಟ ಯಶಸ್ಸು ದೊರೆಯಲು ಸಾಧ್ಯವಾಗುತ್ತದೆ ಎಂದರು.

ಕ್ಷೇತ್ರದ ಎಲ್ಲಾ ದಲಿತರು ಒಗ್ಗಟಾಗಿ ಪಕ್ಷಭೇದ ಮರೆತು ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ. ಕ್ಷೇತ್ರದಲ್ಲಿನ ಎಲ್ಲಾ ದಲಿತ ಸಂಘಟನೆಗಳನ್ನು ಒಗ್ಗೂಡಿಸುವ ಕೆಲಸ ಮಹದೇವಪುರ ದಲಿತ ಸಂಘಟನೆ ಮಾಡಲಿ ಎಂದರು.

ಹೂಡಿಯಿಂದ ದಿನ್ನೂರು, ಕಾಡುಗೋಡಿ, ಬೆಳತ್ತೂರು, ಸಾದರ ಮಂಗಲ ಸೇರಿದಂತೆ ವಿವಿಧೆಡೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಲ್ಲಕ್ಕಿ ಜೊತೆಗೆ ಬೈಕ್ ಯ್ಯಾಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿ ವಿಕ್ರಮ್, ಬಿಎಸ್ ಎಸ್ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರ ಮುಖಂಡರಾದ ನಲ್ಲೂರಹಳ್ಳಿ ವಿನೋದಾ, ದೇವರಾಜ್ ಸೂರ್ಯವಂಶಿ, ಕಾಡುಗುಡಿ ಸೊಣ್ಣಪ್ಪ , ಕೃಷ್ಣಮೂರ್ತಿ, ಮಾದೇಶ್, ಮಂಜು ಇದ್ದರು.