ಬೀದಿ ಬದಿಯ ವ್ಯಾಪಾರಸ್ಥರ ರಕ್ಷಣೆ ನಮ್ಮ ಸಂಘಟನೆಯ ಹೊಣೆ: ಹೂಡಿ ರಾಮಚಂದ್ರ
ಸ್ಥಳೀಯ ಸುದ್ದಿ


ಮಹದೇವಪುರ: ಸ್ವತಂತ್ರವಾಗಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ವೈಟ್ ಫೀಲ್ಡ್ ಸುತ್ತಮುತ್ತ ಬೀದಿ ಬದಿಯಯಲ್ಲಿ ಗಾಡಿಗಳನ್ನ ಹಾಕಿಕೊಂಡು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿರುವ ವ್ಯಾಪಾರಸ್ಥರನ್ನ ಖಾಸಗಿ ಸಂಸ್ಥೆಗಳು ಮತ್ತು ಅಧಿಕಾರಿಗಳು ಒಕ್ಕಲಿಬಿಸಲು ಮುಂದಾಗಿರುವುದನ್ನು ಬೀದಿ ಬದಿಯ ವ್ಯಾಪಾರಿಗಳ ಒಕ್ಕೂಟ ಖಂಡಿಸುತ್ತದೆ ಎಂದು ಭಾರತೀಯ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಹೂಡಿ ಚಿನ್ನಿ ರಾಮಚಂದ್ರ ತಿಳಿಸಿದರು.
ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ನ ಬೆನ್ಸ್ ರಸ್ತೆ, ಮಣಿಪಾಲ್, ಟಾಸ್ಕೋ, ಗೋಪಾಲನ್, ಎಸ್.ಜೆ ಆರ್ ರಸ್ತೆ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ನಾಮಫಲ ಉದ್ಘಾಟನೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಗೆ ಆಚರಣೆ ಮಾಡಿ ಅವರು ಮಾತನಾಡಿದರು.
ಸುಪ್ರೀಂ ಕೋರ್ಟ್ ಅದೇಶದಂತೆ ಇಲ್ಲಿನ ವ್ಯಾಪಾರಿಗಳು ಲೈಸೆನ್ಸ್ ಹೊಂದಿದ್ದಾರೆ, ಸುಮಾರು ಹತ್ತಾರು ವರ್ಷದಿಂದ ಬೀದಿ ವ್ಯಾಪಾರ ಮಾಡುತ್ತಿದ್ದವರನ್ನು ಬೀದಿಗೆ ಹಾಕಲು ಹುನ್ನಾರ ನಡೆಯುತ್ತಿರುವವರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಬೀದಿ ವ್ಯಾಪಾರಿಗಳು ಬಹುತೇಕ ಬಡವರು ಆಗಿದ್ದಾರೆ. ಇವರ ರಕ್ಷಣೆಗೆ ಸದಾ ನಮ್ಮ ಸಂಘಟನೆ ಇರುತ್ತೆ. ವ್ಯಾಪಾರಸ್ಥರ ಪರ ಯಾವುದೇ ಹೋರಾಟಕ್ಕೂ ಸಿದ್ದರಾಗಿದ್ದೆವೆ ಎಂದು ಎಚ್ಚರಿಕೆ ನೀಡಿದರು.
ಹಣದ ಆಸೆಗೆ ಖಾಸಗಿ ಕಂಪನಿಯವರ ಮಾತುಗಳನ್ನ ಕೇಳಿ ಆಗಾಗ್ಗೆ ವ್ಯಾಪಾರಿಗಳಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ,ಬೀದಿಗಳಲ್ಲಿ ವ್ಯಾಪಾರ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಾ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುತ್ತಾ ಜೀವನ ಸಾಗಿಸುತ್ತಿರುವವರಿಗೆ ಕಿರುಕುಳ ಕೊಟ್ಟರೆ ಅದನ್ನ ಸಹಿಸುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಅಮರ್, ಕಾರ್ಮಿಕ ಘಟಕದ ಅಧ್ಯಕ್ಷ ಆಂಜಿನಪ್ಪ, ಕೃಷ್ಣಪ್ಪ, ನಾರಾಯಣಸ್ವಾಮಿ, ಮುನಿರಾಜು, ಆಟೋ ಶ್ರೀನಿವಾಸ್, ವಕೀಲರಾದ ವಿಕ್ರಮ್, ಶ್ರೀನಿವಾಸ್ ರೆಡ್ಡಿ, ಯಶೋಧಮ್ಮ, ಪರಿಮಳ, ಅನುಸೂಯಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.