ವಕೀಲರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ : ವಕೀಲರಿಗೆ ಸೂಕ್ತವಾದ ಭದ್ರತೆ ಒದಗಿಸಲು ವಕೀಲರ ಆಗ್ರಹ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/21/20251 min read

ವಕೀಲರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ : ವಕೀಲರಿಗೆ ಸೂಕ್ತವಾದ ಭದ್ರತೆ ಒದಗಿಸಲು ವಕೀಲರ ಆಗ್ರಹ

ದೊಡ್ಡಬಳ್ಳಾಪುರ : ದುಷ್ಕರ್ಮಿಯೊಬ್ಬ ಹಾಡಹಗಲೇ ಹಿರಿಯ ವಕೀಲರಾದ ಸದಾಶಿವರೆಡ್ಡಿಯವರನ್ನು ಬೆಂಗಳೂರಿನ ಅವರ ಕಛೇರಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೇ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಯನ್ನು ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸಿ, ಸೋಮವಾರ ವಕೀಲರು ಕಲಾಪದಿಂದ ಹೊರಗುಳಿದು ಹೊರಗುಳಿದು ನ್ಯಾಯಾಲಯದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನಂತರ ವಕೀಲರಿಗೆ ಸೂಕ್ತವಾದ ಭದ್ರತೆಯನ್ನು ಒದಗಿಸುವುದರ ಬಗ್ಗೆ ಠರಾವು ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಉಪ-ವಿಭಾಗಾಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವೇಳೆ ಮಾತನಾಡಿದ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ಕಾರ್ಯದರ್ಶಿ .ಕೃಷ್ಣಮೂರ್ತಿ, ಇದೇ .16ರಂದು ಭಾರತೀಯ ವಕೀಲ ಪರಿಷತ್ತಿನ ಸಹ ಅಧ್ಯಕ್ಷ, ಕರ್ನಾಟಕ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಸದಾಶಿವರೆಡ್ಡಿಯವರನ್ನು ಬೆಂಗಳೂರಿನಲ್ಲಿನ ಅವರ ಕಛೇರಿಗೆ ನುಗ್ಗಿ ದುಷ್ಕರ್ಮಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಮಾಡಿದ್ದಾನೆ. ಘಟನೆಯಲ್ಲಿ ಅವರಿಗೆ ತೀವ್ರ ಗಾಯಗಳಾಗಿದ್ದು, ಆತಂಕಕಾರಿ ಬೆಳವಣಿಗೆಯಾಗಿದೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಅಪನಂಬಿಕೆಯನ್ನು ಬಿಂಬಿಸುತ್ತದೆ.

ಬೆಳವಣಿಗೆಯಿಂದಾಗಿ ವೃತ್ತಿಪರ ವಕೀಲರುಗಳಿಗೆ ಪಾರದರ್ಶಕವಾಗಿ ಮತ್ತು ನಿರ್ಭಯವಾಗಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಸಾಮಾನ್ಯ ಮತ್ತು ಅತಿ ಸಾಮಾನ್ಯ ಜನರ ಪರವಾಗಿ ಸಂವಿಧಾನ ಬದ್ದವಾಗಿ ಕಾನೂನು ವಾದ ಮಂಡಿಸುವ ವಕೀಲರು ಕೂಡ ಕುಟುಂಬಗಳನ್ನು ಹೊಂದಿದ್ದು ರೀತಿಯ ಅಮಾನವೀಯ ಕೃತ್ಯಗಳಿಂದ ಕುಟುಂಬದ ಸದಸ್ಯರು ಆಂತಕ ಮತ್ತು ಭಯದ ವಾತಾವರಣದಿಂದ ದಿನ ಕಳೆಯುವಂತಾಗಿದೆ. ರೀತಿಯ ಹಲ್ಲೆಗಳು ವಕೀಲರುಗಳ ಮೇಲೆ ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ವಕೀಲರ ರಕ್ಷಣೆ ಮಾಡುವುದು ಸ್ಥಳೀಯ ಆಡಳಿತ ಅಕಾರಿಗಳು ಹಾಗೂ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ. ಹಿರಿಯ ವಕೀಲರಾದ ಸದಾಶಿವರೆಡ್ಡಿಯವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಸಂಘ ಒತ್ತಾಯಿಸುತ್ತಿದ್ದು, ಮತ್ತೊಮ್ಮೆ ರೀತಿಯಾದ ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ವಕೀಲರಿಗೆ ಸೂಕ್ತವಾದ ಭದ್ರತೆಯನ್ನು ಒದಗಿಸುವುದರ ಬಗ್ಗೆ ಸರ್ಕಾರ ಠರಾವು ಹೊರಡಿಸಬೇಕಿದೆ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ವಿಜಯ ಕುಮಾರ್, ಖಜಾಂಚಿ ಮುನಿರಾಜು.ಎಂ, ಹಿರಿಯ ವಕೀಲರಾದ ಸೈಯದ್ ನಿಸಾರ್ ಉಲ್ಲಾ, ರೇಣುಕಾರಾಧ್ಯ,ಬೈರೇಗೌಡ, ಅಸಾದುಲ್ಲಾ ಖಾನ್, ಬಿ.ಎಸ್.ಕೃಷ್ಣಮೂರ್ತಿ ಸೇರಿದಂತೆ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಪದಾಕಾರಿಗಳು ಭಾಗವಹಿಸಿದ್ದರು.