ಪೆಹಲ್ಗಾಮ್ ಉಗ್ರರ ದಾಳಿ; ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಮೆರವಣಿಗೆ
ಸ್ಥಳೀಯ ಸುದ್ದಿ


ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಮುಂಬತ್ತಿಯೊಂದಿಗೆ ಮೌನ ಮೆರವಣಿಗೆ ನಡೆಯಿತು.
ಕನಸವಾಡಿಯ ಬೆಳವಂಗಲ ಕ್ರಾಸ್ ನಿಂದ ಶನಿಮಹಾತ್ಮ ದೇವಸ್ದಾನದವರೆಗೆ ಕಾಲು ನಡಿಗೆಯೊಂದಿಗೆ ಮೊಂಬತ್ತಿ ಹಚ್ಚಿ ಮೌನ ಮೆರವಣಿಗೆ ನಡೆಸಿ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕಾಶ್ಮೀರ ಹತ್ಯಾಕಾಂಡವನ್ನು ಖಂಡಿಸಿದರು.
ಮೆರವಣಿಗೆಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ದೇಶದ ಎಲ್ಲಾ ಜನರು ಖಂಡಿಸಬೇಕಾಗಿದೆ. ಭಾರತ ಭಾವೈಕ್ಯತೆ ಉಗ್ರರು ಮಾರಕವಾಗಿದ್ದಾರೆ. 26 ಮಂದಿಯನ್ನು ಹತ್ಯೆ ಮಾಡಿರುವ ಉಗ್ರವಾದಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ಕಾನೂನು ಮತ್ತು ಭದ್ರತಾ ವ್ಯವಸ್ಥೆ ಸಮಪರ್ಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಮೆರವಣಿಗೆಯಲ್ಲಿ ಮಧುರೆ ಕಲಾವಿದರ ಸಂಘ ,ಇಸ್ತೂರು ಕೋದಂಡರಾಮಸ್ವಾಮಿ ಭಜನಾ ಸಂಘ, ಶ್ರೀಅಭಯ ಆಂಜನೇಯಸ್ವಾಮಿ ಸಮಿತಿ ಮತ್ತು ಮಧುರೆ ಹೋಬಳಿಯ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಭಯೋತ್ಪಾದಕರ ದಾಳಿಗೆ ಮೃತರಾದವರಿಗೆ ಗೌರವ ನಮನ:
ದೊಡ್ಡಬಳ್ಳಾಪುರ ನಗರದ ಸಮೀಪವಿರುವ ಅನಿಬೆಸೆಂಟ್ ಪಾರ್ಕ್ ನಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ರಾಜ್ಯ ಸಂಸ್ಥೆ ಆಯೋಜಿಸಿದ್ದ ರೋವರ್ಸ್ ಮತ್ತು ರೇಂಜರ್ಸ ಗಳ ಕೌಶಲ್ಯ ತರಬೇತಿ ಶಿಬಿರದ ಶಿಬಿರಾರ್ಥಿಗಳಿಂದ ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಧಾಳಿಗೆ ಬಲಿಯಾದ ದೇಶದ ನಾಗರಿಕರಿಗೆ ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಮುಖ್ಯ ಆಯುಕ್ತರು ನಾಗರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು , ಚಂದ್ರು, ನಿತಿನ್ ಅಮೀನ್, ವಿಶ್ವನಾಥ್, ನವೀನ್ ಕುಮಾರ್, ಅಶೋಕ್ ಕುಮಾರ್, ನಿಹಾಲ್ , ಸುಮಾ, ಶೋಭಾ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.