ಬ್ಯಾಂಕ್ ಖಾತೆಗಳನ್ನು ತೆರೆಸಿ ಹಣ ದೋಚುತ್ತಿದ್ದ ಮೂವರು ವಂಚಕರ ಸೆರೆ
ಕ್ರೈಮ್


ಕೋಲಾರ: ಸಾರ್ವಜನಿಕರಿಗೆ ಕಮಿಷನ್ ಆಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ಅಪರಾದಕ್ಕೆ ಬಳಕೆ ಮಾಡುತ್ತಿದ್ದ ಅಂತರ್ ರಾಜ್ಯ ಆರೋಪಿಗಳನ್ನು ಇಲ್ಲಿನ ಸಿಇಎನ್ ಠಾಣೆ ಪೊಲೀಸರು ಬಂದಿಸಿದ್ದಾರೆ.
ಬಂದಿತರಾದ ಕೊಮ್ಮಿರಿ ರಾಜ್ ಕುಮಾರ್, ಕೊಡಾ ಸುರೇಶ್, ಅಖಿಲ್ ಶೇಖ್ ಅಬೀದ್ ಪಾಷ ಎಂಬುವವರು ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಕೋಲಾರ ಜಿಲ್ಲೆ ಮತ್ತು ದೇಶದ ಇತರೆ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ವಿವಿಧ ಆಮಿಷ ಒಡ್ಡಿ ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆಸಿ ಸೈಬರ್ ವಂಚಕರೊಂದಿಗೆ ಕೈಜೋಡಿಸಿ ಈ ಬ್ಯಾಂಕ್ ಖಾತೆಗಳನ್ನು ಸೈಬರ್ ಅಪರಾಧಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳು ಆಂದ್ರಪ್ರದೇಶದವರಾಗಿದ್ದು ಅವರ ವಶದಲ್ಲಿದ್ದ 137 ವಿವಿಧ ಬ್ಯಾಂಕ್ ಗಳ ಎಟಿಎಂ ಕಾರ್ಡಗಳು, 21 ಬ್ಯಾಂಕ್ ಪಾಸ್ ಬುಕ್ಗಳು, 10 ಚೆಕ್ ಬುಕ್ಗಳು 3 ಸಿಮ್ ಕಾರ್ಡುಗಳು ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ಮೂರು ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಬಿ. ನಿಖಿಲ್ ತಿಳಿಸಿದ್ದಾರೆ.