ತಿರುಪತಿ: ರೂ.3.86 ಕೋಟಿ ಮೌಲ್ಯದ ಚಿನ್ನದ ಜನಿವಾರ ಕಾಣಿಕೆಯಾಗಿ ಕೊಟ್ಟ ದಂಪತಿ

ದೇಶ/ವಿದೇಶ

ಧರ್ಮ ಬಸವನಪುರ.

9/27/20251 min read

ಆಂಧ್ರ: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ವಿಶಾಖಪಟ್ಟಣದ ದಂಪತಿಗಳು ಮಹಾನ್‌ ದೇಣಿಗೆ ನೀಡಿದ್ದಾರೆ, 3.86 ಕೆಜಿ ತೂಕದ ಮತ್ತು ₹3.86 ಕೋಟಿ ಮೌಲ್ಯದ ಚಿನ್ನದ ಯಜ್ಞೋಪವೀತ (ಪವಿತ್ರ ದಾರ)ವನ್ನು ಅರ್ಪಿಸಿದ್ದಾರೆ. ಈ ದಾನವನ್ನು ಸೆಪ್ಟೆಂಬರ್ 24 ರಂದು ನೀಡಲಾಗಿದೆ.

ಪುವ್ವಾಡ ಮಸ್ತಾನ್‌ ರಾವ್‌ ಹಾಗೂ ಅವರ ಪತ್ನಿ ಕುಂಕುಮ ರೇಖಾ ಅವರು 3.86 ಕೆ.ಜಿ ತೂಕದ ಬಹುಎಳೆಯ ಜನಿವಾರವನ್ನು ತಿರುಮಲ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ ಎಂದು ದೇಗುಲದ ಆಡಳಿತ ಮಂಡಳಿಯಾಗಿರುವ ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ

ವಜ್ರಗಳಿಂದ ಕೂಡಿದ ಪವಿತ್ರ ಬಹು-ಪದರದ ದಾರವನ್ನು ಈ ಸಂದರ್ಭಕ್ಕಾಗಿ ವಿಶೇಷವಾಗಿ ರಚಿಸಲಾಗಿದೆ.ಯಜ್ಞೋಪವೀತ ಎನ್ನುವುದು ತಿರುಪತಿ ವೆಂಕಟೇಶ್ವರ ಸ್ವಾಮಿ ಧರಿಸುವ ಅತ್ಯಂತ ಪ್ರಮುಖವಾದ ಆಭರಣ ಎಂದು ಗುರುತಿಸಲಾಗುತ್ತದೆ.

ಅವರ ಗಣನೀಯ ಕೊಡುಗೆಯನ್ನು ಗುರುತಿಸಿ, ದಾನಿಗಳನ್ನು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಸನ್ಮಾನಿಸಿದರು, ಅವರಿಗೆ ಪವಿತ್ರ ಜಲ ನೈವೇದ್ಯವಾದ ಶ್ರೀವರಿ ತೀರ್ಥ ಪ್ರಸಾದವನ್ನು ಪ್ರದಾನ ಮಾಡಿದರು. ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾದ ತಿರುಪತಿಯಲ್ಲಿರುವ ಭಗವಾನ್ ವೆಂಕಟೇಶ್ವರ ಸ್ವಾಮಿ ದೇವಾಲಯದ ಅಧಿಕೃತ ಪಾಲಕರಾಗಿ ಟಿಟಿಡಿ ಕೆಲಸ ಮಾಡುತ್ತಿದೆ