Tuesday, May 19, 2026
Home ಬೆಂಗಳೂರು ನಗರರಾಷ್ಟ್ರೀಯ ಜನಗಣತಿ-2027ರ ಗಣತಿದಾರರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಉಳ್ಳವರಿಗೆ ಸುವರ್ಣ ಅವಕಾಶ: ನೇರ ಸಂದರ್ಶನಕ್ಕೆ ಆಹ್ವಾನ-ಡಿ.ಎಸ್.ರಮೇಶ್

ರಾಷ್ಟ್ರೀಯ ಜನಗಣತಿ-2027ರ ಗಣತಿದಾರರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಉಳ್ಳವರಿಗೆ ಸುವರ್ಣ ಅವಕಾಶ: ನೇರ ಸಂದರ್ಶನಕ್ಕೆ ಆಹ್ವಾನ-ಡಿ.ಎಸ್.ರಮೇಶ್

by Dharmaraju
0 comments


ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ-2027ರ ಮೊದಲನೇ ಹಂತದ ಕಾರ್ಯವಾದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಹಾಗೂ ಫೆಬ್ರವರಿ 2027ರಲ್ಲಿನ 2ನೇ ಹಂತದ ಜನಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಹಾಗೂ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದು, ರಾಷ್ಟ್ರೀಯ ಮಹತ್ವದ ಈ ಕಾರ್ಯ ನಿರ್ವಹಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸುವ ಸಲುವಾಗಿ ಗಣತಿ ಕಾರ್ಯ ನಿರ್ವಹಿಸಲು ಆಸಕ್ತ ವಿದ್ಯಾರ್ಥಿಗಳು,ಸ್ವಯಂ ಸೇವಕರು, ಪುರುಷರು ಹಾಗೂ ಮಹಿಳೆಯರು ನೇರ ಸಂದರ್ಶನಕ್ಕೆ ಹಾಜರಾಗುವಂತೆ ಪೂರ್ವ ನಗರ ಪಾಲಿಕೆ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿಯಾದ ಡಿ.ಎಸ್.ರಮೇಶ್ ರವರು ಮನವಿ ಮಾಡಿದರು.

ಆಯ್ಕೆಗೆ ಪರಿಗಣಿಸಲಿರುವ ಗಣತಿದಾರರ ಸಂಖ್ಯೆ, ವಿದ್ಯಾರ್ಹತೆ, ಗೌರವ ಧನ, ಹಾಗೂ ಇನ್ನಿತರೆ ವಿವರ

* ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು.

* ಆಂಡ್ರಾಯ್ಡ್ 12.0 ತಂತ್ರಾಂಶದೊಂದಿಗೆ 4 ಜಿಬಿ ರ್ಯಾಮ್ ಸಾಮರ್ಥ್ಯದ ಸ್ವಂತ ಮೊಬೈಲ್ ಹೊಂದಿರಬೇಕು.

* ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮಹದೇವಪುರ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೆ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

* ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ದಿನಾಂಕ: 15-05-2026 ವರೆಗೆ ನಡೆಯಲಿದ್ದು, ಅಲ್ಲಿಯವರೆಗೆ ರಜಾ ದಿನವೂ ಸೇರಿದಂತೆ ನಿರಂತರವಾಗಿ ಕಾರ್ಯನಿರ್ವಹಿಸಲು ಬದ್ಧರಾಗಿರಬೇಕು.

* ಭಾರತದ ಜನಗಣತಿ-2027ರ ಜನಗಣತಿ ಮಾರ್ಗಸೂಚಿಯನ್ವಯ ದಿನಾಂಕ: 15-05-2026 ವರೆಗಿನ ಮೊದಲ ಹಂತದ ಗಣತಿ ಕಾರ್ಯಕ್ಕೆ ರೂ.9,000/- (ರೂ. ಒಂಭತ್ತು ಸಾವಿರ ಮಾತ್ರ) ಗೌರವಧನ ನೀಡಲಾಗುವುದು (ಕನಿಷ್ಠ 150-200 ಮನೆಗಳಿಗೆ)

* ಭಾರತದ ಜನಗಣತಿ-2027ರ 2ನೇ ಹಂತದ ಕಾರ್ಯವು ಫೆಬ್ರವರಿ-2027 ರ ಮಾಹೆಯಲ್ಲಿ ನಡೆಯಲಿದ್ದು, ಸದರಿ ಕಾರ್ಯಕ್ಕೆ ರೂ.16,000/- (ರೂ. ಹದಿನಾರು ಸಾವಿರ ಮಾತ್ರ) ಗೌರವಧನ ನೀಡಲಾಗುವುದು.(150-200 ಮನೆಗಳಿಗೆ ಅಥವಾ 750 ರಿಂದ 800 ಜನಸಂಖ್ಯೆಗೆ)

* ಈ ಆಯ್ಕೆಯು ಭಾರತದ ಜನಗಣತಿ-2027ರ ಗಣತಿ ಕಾರ್ಯ ನಿರ್ವಹಣೆಗೆ ಮಾತ್ರ ಸೀಮಿತವಾಗಿರುತ್ತದೆ.

* ಆಯ್ಕೆಯಾದವರಿಗೆ ಕಾರ್ಯ ನಿರ್ವಹಣೆ ಅನುಕೂಲವಾಗಲು ಜನಗಣತಿ ಮೊಬೈಲ್ ಅಪ್ಲಿಕೇಷನ್ ನಲ್ಲಿ ಮಾಹಿತಿ ಪಡೆಯುವ ಹಾಗೂ ಗಣತಿ ಕಾರ್ಯನಿರ್ವಹಣೆ ಬಗ್ಗೆ ಮಾಸ್ಟರ್ ಟೈನರ್ ಗಳಿಂದ ಅಗತ್ಯ ತರಬೇತಿ ನೀಡಲಾಗುವುದು.

* ಆಯ್ಕೆ ಮಾಡಿಕೊಳ್ಳುವ ಗಣತಿದಾರರ ಸಂಖ್ಯೆ: 1,000 ಗಣತಿದಾರರು.

* ನೇಮಕಾತಿ ಮಾಡಿಕೊಳ್ಳುವುದು ಪೂರ್ವ ನಗರ ಪಾಲಿಕೆ ಮಾನ್ಯ ಆಯುಕ್ತರ ವಿವೇಚನೆಗೆ ಒಳಪಟ್ಟಿರುತ್ತದೆ.

ನೇರ ಸಂದರ್ಶನ ದಿನಾಂಕ, ಸಮಯ ಮತ್ತು ಸ್ಥಳ
* ದಿನಾಂಕ: 24-04-2026 ರಂದು (ಶುಕ್ರವಾರ)
* ಸಮಯ: ಬೆಳಿಗ್ಗೆ 10.00 ಗಂಟೆಗೆ
* ಸ್ಥಳ: ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಹೊರವರ್ತುಲ ರಸ್ತೆ, ಮಾರತಹಳ್ಳಿ ಹತ್ತಿರ, ಕಾಡುಬೀಸನಹಳ್ಳಿ ಬೆಂಗಳೂರು-560103
* ಲೊಕೇಶನ್: https://maps.app.goo.gl/qEUBkfYeWu7iAFaF6?g_st=ac
ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಲು ಜನಗಣತಿ ಅಂಕಿಅಂಶಗಳು ಅತಿಮುಖ್ಯವಾದದ್ದಾಗಿದ್ದು, ಆಸಕ್ತರಾದರು ರಾಷ್ಟ್ರೀಯ ಜನಗಣತಿ 2027ರ ಗಣತಿ ಕಾರ್ಯದಲ್ಲಿ ಗಣತಿದಾರರಾಗಿ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರ ಸೇವೆಗೆ ಕೈ ಜೋಡಿಸುವಂತೆ ಆಯುಕ್ತರು ಕರೆ ನೀಡಿದರು.

You may also like

Leave a Comment