Wednesday, April 15, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ: 5 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ- ಶಾಸಕ ಧೀರಜ್ ರಿಂದ ಉದ್ಯಾನವನ ಲೋಕಾರ್ಪಣೆ

ದೊಡ್ಡಬಳ್ಳಾಪುರ: 5 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ- ಶಾಸಕ ಧೀರಜ್ ರಿಂದ ಉದ್ಯಾನವನ ಲೋಕಾರ್ಪಣೆ

ದೊಡ್ಡಬಳ್ಳಾಪುರ: 5 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ- ಶಾಸಕ ಧೀರಜ್ ರಿಂದ ಉದ್ಯಾನವನ ಲೋಕಾರ್ಪಣೆ

by Raghavendra H A
0 comments

ದೊಡ್ಡಬಳ್ಳಾಪುರ : ಪ್ರತಿ ವಾರ್ಡ್​ಗಳಲ್ಲಿಯೂ ಉದ್ಯಾನವನ ಅಭಿವೃದ್ಧಿ ಮಾಡುವುದರಿಂದ ಆಯಾ ಭಾಗದ ಜನತೆಗೆ ವೃದ್ಧರಿಗೆ ವಾಕಿಂಗ್​ ಮತ್ತು ಕೆಲಕಾಲ ಸ್ನೇಹಿತರೊಂದಿಗೆ ಕಾಲಕ್ಷೇಪ ಮಾಡಲು ಅನುಕೂಲವಾಗುತ್ತದೆ ಎಂದು ಶಾಸಕ ಧೀರಜ್​ ಮುನಿರಾಜು ಹೇಳಿದರು.

ನಗರದ ಕೆಂಪೇಗೌಡರ ನಗರದಲ್ಲಿ ಬುಧವಾರ ಫಾಕ್ಸ್​ಕಾನ್​ ಸಿಎಸ್​ಆರ್​ ನಿಧಿಯಡಿ ನೂತನವಾಗಿ ಅಭಿವೃದ್ಧಿಪಡಿಸಿದ ಉದ್ಯಾನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಾಗರಕೆರೆ ಅಭಿವೃದ್ಧಿಗೂ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಫಾಕ್ಸ್​ಕಾನ್​ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಗರಸಭೆ ಉಪಾಧ್ಯಕ್ಷ ಮಲ್ಲೇಶ್​ ಮಾತನಾಡಿ, ತಾಲೂಕಿನಲ್ಲಿ ವಿವಿಧ ಕಂಪನಿಗಳು ತಲೆಎತ್ತುತ್ತಿವೆ. ನಿಯಾಮನುಸಾರ ಕಂಪನಿಗಳು ಸಿಎಸ್​ಆರ್​ ನಿಧಿಯನ್ನು ತೆಗೆದಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಂದು ಏಳನೇ ವಾರ್ಡ್​ನಲ್ಲಿ 5 ಲಕ್ಷ ರೂ. ಮೊತ್ತದಲ್ಲಿ ಪಾಳುಬಿದ್ದ ಜಾಗದಲ್ಲಿ ಸುಂದರ ಉದ್ಯಾನವನ ಅಭಿವೃದ್ಧಿಪಡಿಸಲಾಗಿದೆ. ನಗರಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ನಗರಸಭೆಯಿಂದ ಯಾವುದೇ ಷರತ್ತುಗಳಿಲ್ಲದೆ ಕಂಪನಿಗಳ ಜತೆ ಕೈಜೋಡಿಸಿ ಕೆಲಸ ಮಾಡಲಾಗುವುದು ಎಂದರು.

ಪಿಆರ್​ಒ ಮಧುಮಿತ, ಸಿಬ್ಬಂದಿ ಭರತ್​ ದಂಡಿ, ಪರ್ಲ್​,  ಕೃಷ್ಣಪ್ರಸಾದ್​, ರಾಮಕೃಷ್ಣ, ಉದ್ಯಾನವನ ಅಭಿವೃದ್ಧಿ ಪಡಿಸಿದ ರೇಣುಕಾ ಪ್ರಸಾದ್​ ಇದ್ದರು.

You may also like

Leave a Comment